ಹೊನ್ನ ಹುಡುಗಿ

ಬಿಳಿಹಳದಿ ತೆಳುವಾದ ಮಕಮಲ್ಲಿನುಡಿಗೆ
ಜುಳುಜುಳು ಕಳಕಳದೊಯ್ಯಾರ ನಡಿಗೆ
ಸವಿದೆರೆ ತಿಳಿನಗೆ ತೇಲುನೋಟ ಮುಗಿಲನೆಡೆಗೆ

ನೋವರಿಯದೇಕಾಂತದಾನಂದ ತೀರದಲಿ
ಸಂತೋಷಸಾಗರಲೀನ ಪ್ರಶಾಂತ ಕಾನನ
ಸಾವಿರದ ಸೆಲೆಯುಕ್ಕಿ ಹೊಳೆಯಾಗಿ ಹರಿದಿದೆ ಹರೆಯ
ನೆಲ-ಮುಗಿಲು ಮರ ತೆಮರು ಹುಲ್ಲು-ಹೊದರುಗಳನ್ನೆಲ್ಲ ತುಂಬಿತುಳುಕಿ
ಉಕ್ಕಿ ಹೊಮ್ಮಿದೆ ಪ್ರೇಮಸುಧೆಯ ಚೆಂಬೊನ್ನ ಚೆಲುವು

ಕಣಕಣದ ತುಟಿಗೂ ಬಂಗಾರಚುಂಬನ
ಕಂಡಕಂಡಲ್ಲೇಲ್ಲಾ ಕಡವರವ ಕಂಡರಸಿದಂತಿದೆ
ಚಿನ್ನಕನಸೇ ಮೂರ್ತಿಮಂತಾಗಿ ನಿಂತ ಹೊನ್ನ ಹುಡುಗೀ ಜೊನ್ನ ಬೆಡಗೀ
ನಿನ್ನ ಪಾದವ ಮುತ್ತಿಟ್ಟ ನಿರಿನಿರಿ ಸೀರೆಯನೇರಿ
ಹೂವರಳಿ ಕರೆವ ತನುಲತೆಯನೆಲ್ಲೆಡೆಯಪ್ಪಿ
ಒತ್ತಿ ಮುತ್ತಿಟ್ಟು ಸ್ವರ್ಣಪುಲಕವಾಂತಿದೆ ಹೊಂಬೆಳಕು
ಕೊರಳು ಬೆರಳು ಕೆನ್ನೆ ಕದಪು ತೊಂಡೆತುಟಿ ನೀಳ ನಾಸಿಕ
ಕೂದಲೆಳೆಯೆಳೆ ಮುಡಿಮಾಲೆಗಳಲೆಲ್ಲ ದುಂಬಿಯಾಡಿ
ರಸಸ್ರೋತದಲೋಲಾಡಿ ಆ ಬೆಳಕಿನಪ್ಪುಗೆಯಂತೆ
ಮತ್ತೇರಿ ತೇಲಿಹೋಗುವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ ಹರಿಯುತಿದೆ ಈ ನದಿ ಹೀಗೆ
Next post ಐಸುರ ಮೋರುಮ ದಸರೆಕ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

cheap jordans|wholesale air max|wholesale jordans|wholesale jewelry|wholesale jerseys